ಸ್ವರ್ಣವಲ್ಲಿ ಪರಮಪೂಜ್ಯ ಗಂಗಾಧರೇಂದ್ರ ಸರಸ್ವತಿ ಸ್ವಾಮೀಜಿಯವರಿಗೆ ರಾಜ್ಯ ಸರಕಾರ ಪ್ರತಿಷ್ಟಿತ ಪರಿಸರ ಪ್ರಶಸ್ತಿ ಪ್ರಕಟಿಸಿದೆ . ಹಸಿರು ಸ್ವಾಮೀಜಿಯೆಂದೆ ಪ್ರಸಿದ್ದರಾಗಿರುವ ನಮ್ಮ ಗುರುಗಳಿಗೆ ನೀಡುವ ಈ ಪ್ರಶಸ್ತಿಯಿಂದ ಅದರ ಗೌರವ ಇನ್ನಷ್ಟು ಹೆಚ್ಚಿದೆ ಅಂದರೆ ತಪ್ಪಲ್ಲ .
ಉತ್ತರ ಕನ್ನಡದ ಜನರ ಜೀವನಾಡಿಯಾದ ಪರಿಸರದ ಮೇಲೆ ನಡೆಯುತ್ತಿರುವ ನಿರಂತರ ದೌರ್ಜನ್ಯದ ಮಧ್ಯೆಯೂ ಜನ ಇಂದು ನೆಮ್ಮದಿಯಂದ ಬದುಕು ನಡೆಸುತ್ತ ಇದ್ದಾರೆ ಅಂದರೆ ಅದಕ್ಕೆ ಕಾರಣ ನಮ್ಮ ಸ್ವಾಮೀಜಿ . ಅವರ ಪರಿಸರ ಹೋರಾಟಗಳೇ ಹಾಗೆ . ಇಡೀ ದೇಶಮಟ್ಟದ ಪರಿಸರ ಹೋರಾಟಗಳಿಗೆ ಇಂದು ನಮ್ಮ ಸ್ವಾಮೀಜಿ ಮಾರ್ಗದರ್ಶಕರು ಅಂದರೆ ಅವರ ಪರಿಸರ ಹಾಗು ಶಿಷ್ಯರೆಡೆಗಿನ ಅನನ್ಯ ಕಾಳಜಿ ಎಂಥದು ನೀವೇ ಯೋಚಿಸಿ .
ಅದು ಬೇಡ್ತಿ ಅಘನಾಶಿನಿ , ನದಿತಿರುವೂ ಯೋಜನೆ ಯಾವುದೇ ಇರಲಿ ಶಿಷ್ಯರ ಸಹಾಯಕ್ಕೆ ಸ್ವಾಮೀಜಿ ಸದಾ ಅಲ್ಲಿ ಹಾಜರ್ . ಬೇಡ್ತಿ ಹೋರಾಟದ ಪಾದಯಾತ್ರೆ ಸಂದರ್ಭದಲ್ಲಿ ಕಾಲಿಗೆ ಬೊಕ್ಕೆ ಬಂದರು ಪಾದುಕೆ ಧರಿಸದ ಅಪ್ಪಟ ಹೋರಾಟಗಾರ . ಆದ್ದರಿಂದಲೇ ಅವರ ಹೆಸರಿನ ಹಿಂದೆ "ಹಸಿರು ಸ್ವಾಮೀಜಿ" ಎಂಬ ಪ್ರೀತಿಯ ಕೂಗು . ಪ್ರಚಾರ ಪ್ರಿಯರಾಗದೆ ತಮ್ಮ ಕೆಲಸಗಳಿಂದಲೇ ಪ್ರಸಿದ್ದರಾದವರು ನಮ್ಮ ಸ್ವಾಮೀಜಿ .ಎಂದೋ ಬರಬೇಕಿದ್ದ ಈ ಗೌರವ ಸರಕಾರದಿಂದ ಈಗ ಬಂದಿದೆ . ಜೂನ್ ೫ ರಂದು ಬೆಂಗಳೂರು ಸೆಂಟ್ರಲ್ ಕಾಲೇಜಿನಲ್ಲಿ
ನಡೆಯುವ ಸಮಾರಂಭದಲ್ಲಿ ಮುಖ್ಯಮಂತ್ರಿಗಳು ಶ್ರೀಗಳನ್ನ ಗೌರವಿಸಿ ಆಶಿರ್ವಾದ ಪಡೆಯಲಿದ್ದಾರೆ .
ಕಾಮೆಂಟ್ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ