ಶುಕ್ರವಾರ, ಜೂನ್ 3, 2011

ಹಸಿರು ಸ್ವಾಮೀಜಿಗೆ ಪರಿಸರ ಪ್ರಶಸ್ತಿ

ಸ್ವರ್ಣವಲ್ಲಿ ಪರಮಪೂಜ್ಯ ಗಂಗಾಧರೇಂದ್ರ ಸರಸ್ವತಿ ಸ್ವಾಮೀಜಿಯವರಿಗೆ  ರಾಜ್ಯ ಸರಕಾರ  ಪ್ರತಿಷ್ಟಿತ  ಪರಿಸರ  ಪ್ರಶಸ್ತಿ  ಪ್ರಕಟಿಸಿದೆ .  ಹಸಿರು ಸ್ವಾಮೀಜಿಯೆಂದೆ  ಪ್ರಸಿದ್ದರಾಗಿರುವ  ನಮ್ಮ  ಗುರುಗಳಿಗೆ   ನೀಡುವ  ಈ  ಪ್ರಶಸ್ತಿಯಿಂದ  ಅದರ   ಗೌರವ  ಇನ್ನಷ್ಟು ಹೆಚ್ಚಿದೆ ಅಂದರೆ   ತಪ್ಪಲ್ಲ .


ಉತ್ತರ ಕನ್ನಡದ  ಜನರ   ಜೀವನಾಡಿಯಾದ   ಪರಿಸರದ  ಮೇಲೆ ನಡೆಯುತ್ತಿರುವ   ನಿರಂತರ  ದೌರ್ಜನ್ಯದ   ಮಧ್ಯೆಯೂ  ಜನ  ಇಂದು ನೆಮ್ಮದಿಯಂದ  ಬದುಕು ನಡೆಸುತ್ತ ಇದ್ದಾರೆ  ಅಂದರೆ  ಅದಕ್ಕೆ ಕಾರಣ  ನಮ್ಮ  ಸ್ವಾಮೀಜಿ . ಅವರ  ಪರಿಸರ  ಹೋರಾಟಗಳೇ  ಹಾಗೆ  .  ಇಡೀ ದೇಶಮಟ್ಟದ  ಪರಿಸರ  ಹೋರಾಟಗಳಿಗೆ  ಇಂದು  ನಮ್ಮ ಸ್ವಾಮೀಜಿ  ಮಾರ್ಗದರ್ಶಕರು  ಅಂದರೆ   ಅವರ  ಪರಿಸರ  ಹಾಗು  ಶಿಷ್ಯರೆಡೆಗಿನ  ಅನನ್ಯ  ಕಾಳಜಿ  ಎಂಥದು  ನೀವೇ ಯೋಚಿಸಿ .

ಅದು  ಬೇಡ್ತಿ ಅಘನಾಶಿನಿ  , ನದಿತಿರುವೂ  ಯೋಜನೆ   ಯಾವುದೇ   ಇರಲಿ   ಶಿಷ್ಯರ   ಸಹಾಯಕ್ಕೆ   ಸ್ವಾಮೀಜಿ  ಸದಾ   ಅಲ್ಲಿ  ಹಾಜರ್ .  ಬೇಡ್ತಿ  ಹೋರಾಟದ   ಪಾದಯಾತ್ರೆ  ಸಂದರ್ಭದಲ್ಲಿ   ಕಾಲಿಗೆ  ಬೊಕ್ಕೆ ಬಂದರು  ಪಾದುಕೆ  ಧರಿಸದ  ಅಪ್ಪಟ   ಹೋರಾಟಗಾರ .  ಆದ್ದರಿಂದಲೇ   ಅವರ  ಹೆಸರಿನ ಹಿಂದೆ  "ಹಸಿರು ಸ್ವಾಮೀಜಿ"  ಎಂಬ  ಪ್ರೀತಿಯ   ಕೂಗು  . ಪ್ರಚಾರ   ಪ್ರಿಯರಾಗದೆ   ತಮ್ಮ ಕೆಲಸಗಳಿಂದಲೇ   ಪ್ರಸಿದ್ದರಾದವರು   ನಮ್ಮ  ಸ್ವಾಮೀಜಿ .
ಎಂದೋ   ಬರಬೇಕಿದ್ದ   ಈ  ಗೌರವ  ಸರಕಾರದಿಂದ  ಈಗ  ಬಂದಿದೆ .  ಜೂನ್   ೫  ರಂದು  ಬೆಂಗಳೂರು  ಸೆಂಟ್ರಲ್ ಕಾಲೇಜಿನಲ್ಲಿ
ನಡೆಯುವ   ಸಮಾರಂಭದಲ್ಲಿ   ಮುಖ್ಯಮಂತ್ರಿಗಳು   ಶ್ರೀಗಳನ್ನ ಗೌರವಿಸಿ  ಆಶಿರ್ವಾದ   ಪಡೆಯಲಿದ್ದಾರೆ .